ಶ್ರೀ ಗೋಪಾಲಕೃಷ್ಣ ಅಡಿಗರ " ಅಳುವ ಕಡಲಲಿ ತೇಲಿ ಬರುತಲಿದೆ ನಗೆಯ ಹಾಯಿ ದೋಣಿ ".. ಹಾಡು ಕೇಳುತ್ತಲೇ ಇದ್ದೇನೆ ..on repeat mode..ಅಡಿಗರ ಪದ್ಯಗಳೇ ಹೀಗೆ .. ಸೀದಾ ಹೃದಯಕ್ಕೆ ಲಗ್ಗೆ ಇಡುವಂಥದ್ದು , ಕಾಡುವಂಥದ್ದು ..ಕೊನೆಗೆ ನಮ್ಮಲ್ಲೇ ಒಂದು ಹಾಡಾಗಿ ಉಳಿಯುವಂಥದ್ದು . ಅಡಿಗರೇ ನಿಮಗೊಂದು ನಮನ.. ಅಡಿಗರ ಈ ಹಾಡು ನನ್ನನ್ನು ಚಿಂತನೆಗೆ ಹಚ್ಚಿಸಿದೆ ..ಒಂದು ತಿಂಗಳು ಬಿಡದೆ ಕಾಡಿದೆ.
ಕೆಲವೊಂದು ಘಟನೆಗಳು ಕೇವಲ ಘಟನೆಗಳಾಗಿ ಉಳಿದರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ?ಹೋಗಲಿ ಆಗಾಗ ಬಂದು ಕಾಡಿದರೂ ,ಕಹಿ ನೆನಪಾಗಿ ಬಂದು ಅಳಿಸಿದರೂ ಪರವಾಗಿರ್ತ ಇರ್ಲಿಲ್ಲ ,ಆದರೆ ಒಮ್ಮೊಮ್ಮೆ ನಮ್ಮ ಬದುಕಿನ ದೃಷ್ಟಿಕೋನವನ್ನೇ ಸಂಪೂರ್ಣವಾಗಿ ಬದಲಾಯಿಸಿಬಿಡುತ್ತದೆ .ನಮ್ಮನ್ನು ರೂಪಿಸುತ್ತಾ,ಕುರೂಪಿಸುತ್ತಾ ಹೋಗುತ್ತದೆ.ಎಲ್ಲಾ ಮುಗೀತು ಅಂದುಕೊಳ್ಳುತ್ತಿರುವಾಗಲೇ ,ಧುತ್ತ್ ಎಂದು ಕಣ್ಣ ಮುಂದೆ ಬಂದು ನಿಂತುಕೊಳ್ಳುತ್ತದೆ ,ಬೇರೆ ಇನ್ನ್ಯಾವುದೋ ರೂಪದಲ್ಲಿ ! ಹೃದಯಕ್ಕೆ ಹತ್ತಿರವಾದವರು ಅಥವಾ ಹೃದಯಕ್ಕೆ ಹತ್ತಿರವಾದ ಸಂಬಂಧವೊಂದು ಸತ್ತಾಗ ನಾವೇಕೆ ಅಳುತ್ತೇವೆ ?ಕೊರಗುತ್ತೇವೆ?ಸೊರಗುತ್ತೇವೆ?ಜೀವನ ಏಕೆ ಶೂನ್ಯವೆನಿಸ ತೊಡಗುತ್ತೆ ?ನಮ್ಮನ್ನು ಯಾವುದು ಅತಿಯಾಗಿ ಕಾಡುತ್ತೆ ? ನೆನಪುಗಳು ಅಲ್ವಾ ?ಈ "ನೆನಪುಗಳು ".ಅದೆಂಥಾ ಶಕ್ತಿ ಈ ನೆನಪುಗಳಿಗೆ .. ನಾವು ಅಳುವುದು ,ಕ್ಷಣ ಕ್ಷಣವೂ ಒದ್ದಾಡುವುದು ಇದೆ ನೆನಪುಗಳಿಗಾಗಿ ,ಇದೇ ನೆನಪುಗಳಿಂದಾಗಿ .ಇನ್ನು ಹೊಸ ನೆನಪುಗಳಿಗೆ ಆಸ್ಪದವಿಲ್ಲ ಎನ್ನುವ ಕಟು ಸತ್ಯದ ಅರಿವಾಗಿ .
ಕೆಲವು ಸಾವಿನ ಸೂತಕ ನಿರಂತರ ,ನಂಬಿಕೆಯ ಕೊಲೆಯಾದಾಗ ಕೈಗೆ ರಕ್ತ ಮೆತ್ತುವುದಿಲ್ಲ. ಹೃದಯದ ಸ್ಪೋಟಕ್ಕೆ ಸದ್ದಿಲ್ಲ. ಇಂತಹ ಘಟನೆಗಳು ಎಂಥಹ ದೃಢ ಮನಸ್ಥಿತಿಯವನನ್ನೂ ದೀನರನ್ನಾಗಿ ಮಾಡಿಬಿಡುತ್ತದೆ.ಆ ಸಂಬಂಧವನ್ನು ಹಿಡಿಟ್ಟುಕೊಂಡಿದ್ದ ನಮ್ಮ ಹೃದಯದ ಒಂದು ಭಾಗ ಆ ವ್ಯಕ್ತಿಯೊಡನೆಯೇ ಸತ್ತು ಹೋಗುತ್ತದೆ . ಅದೊಂದು ಶೋಚನೀಯ ಸ್ಥಿತಿ ,ಅತ್ಯಂತ ಕ್ರೂರವಾದ ಸ್ಥಿತಿ . ನಮ್ಮನ್ನು ನುಂಗುವ ಖಾಲಿತನ . ಮನಸ್ಸು ದೇಹ ಎರಡೂ ದುರ್ಬಲವಾಗುತ್ತ ಹೋಗುತ್ತದೆ .,ತಾತ್ಕಾಲಿಕ ನೆಮ್ಮದಿಯನ್ನು ಅರಸುತ್ತಾ ಹೋಗುತ್ತದೆ .. ಆ ಶೂನ್ಯವನ್ನು ತುಂಬುವ ಪ್ರಯತ್ನದಲ್ಲಿ ತುಂಬಾ ಜನ ಇಲ್ಲೇ ಅಲ್ವಾ ಹೆಜ್ಜೆ ತಪ್ಪೋದು ?ಆತ್ಮಹತ್ಯೆಯ ಬಗ್ಗೆ ಯೋಚಿಸೋದು? ದುಶ್ಚಟಗಳಿಗೆ ಬೀಳೋದು ?
ಆದರೆ ಘಟನೆಯ ತೀವ್ರತೆ ಎಷ್ಟೇ ಇರಲಿ,ಹೃದಯವನ್ನು ಎಷ್ಟೇ ಹಿಂಡಿರಲಿ , ಆತ್ಮಗೌರವವನ್ನು ಎಷ್ಟೇ ಘಾಸಿಗೊಳಿಸಿರಲಿ ,ಈ ಸ್ಥಿತಿಯಿಂದ ನಮ್ಮನ್ನು ನಾವು ಹೊರತರಲು ಪ್ರಯತಿಸಲೇ ಬೇಕು . ಈ ಹಂತವನ್ನು ದಾಟಲೇ ಬೇಕು ಹಾಗು ಈ ನೋವನ್ನು ಸಂಪೂರ್ಣವಾಗಿ ಅನುಭವಿಸಲೇ ಬೇಕು .ಇದರಿಂದ ತಪ್ಪಿಸಿಕೊಳ್ಳಲು ಬೇರೆ ದಾರಿ ಹುಡುಕಿದೇವೋ ,ಮುಗಿಯಿತು ..ಅಲ್ಲೇ ಅದೇ ಸ್ಥಿತಿಯಲ್ಲೇ ಒದ್ದಾಡುತ್ತಲೇ ಇರುತ್ತೇವೆ .ನಮ್ಮನ್ನು ನಾವೇ "victim "mode ಗೆ ತಳ್ಳಿಕೊಂಡು ಬಿಡುತ್ತೇವೆ .ಕೊರಗೋದ್ರಲ್ಲಿ ಸುಖ ಕಾಣುತ್ತೇವೆ. ಹೌದು ಕೆಲವೊಂದು ಘಟನೆಗಳ ತೀವ್ರತೆ ಪದಗಳಿಗೆ ಮೀರಿದ್ದು , ಅನುಭವಿಸಿದವರಿಗೆ ಮಾತ್ರ ಗೊತ್ತು . ಕೆಲವೊಂದು ಭಾವಗಳನ್ನು ಅನುಭವಿಸುವುದು ಸುಲಭವಲ್ಲ, ಆದರೆ ಅನುಭವಿಸದೇ ಉಪಾಯವಿಲ್ಲ .. ಜೀವನ ಸಹಜ ಸ್ಥಿತಿಗೆ ಮರಳ ಬೇಕೆಂದೆರೆ ನೆನಪುಗಳು ಸಹ್ಯ ಎನಿಸುವ ಸ್ಥಿತಿಯನ್ನು ತಲುಪಲೇ ಬೇಕು .ಬದುಕಲು ಭರವಸೆ ಬೇಕು ಹಾಗು ಅದನ್ನು ನಾವೇ ಹುಡುಕಿಕೊಳ್ಳಬೇಕು. ನಮ್ಮ ಬದುಕು ನಮ್ಮ ಜವಾಬ್ಧಾರಿ . ಮುರಿದು ಬಿದ್ದ ಮನ ಮರದ ಕೊರಡು ಆದಷ್ಟು ಬೇಗ ಚಿಗುರಲಿ .. ಹೊಸ ವಸಂತ ಬರಲಿ
ಆದರೆ ಘಟನೆಯ ತೀವ್ರತೆ ಎಷ್ಟೇ ಇರಲಿ,ಹೃದಯವನ್ನು ಎಷ್ಟೇ ಹಿಂಡಿರಲಿ , ಆತ್ಮಗೌರವವನ್ನು ಎಷ್ಟೇ ಘಾಸಿಗೊಳಿಸಿರಲಿ ,ಈ ಸ್ಥಿತಿಯಿಂದ ನಮ್ಮನ್ನು ನಾವು ಹೊರತರಲು ಪ್ರಯತಿಸಲೇ ಬೇಕು . ಈ ಹಂತವನ್ನು ದಾಟಲೇ ಬೇಕು ಹಾಗು ಈ ನೋವನ್ನು ಸಂಪೂರ್ಣವಾಗಿ ಅನುಭವಿಸಲೇ ಬೇಕು .ಇದರಿಂದ ತಪ್ಪಿಸಿಕೊಳ್ಳಲು ಬೇರೆ ದಾರಿ ಹುಡುಕಿದೇವೋ ,ಮುಗಿಯಿತು ..ಅಲ್ಲೇ ಅದೇ ಸ್ಥಿತಿಯಲ್ಲೇ ಒದ್ದಾಡುತ್ತಲೇ ಇರುತ್ತೇವೆ .ನಮ್ಮನ್ನು ನಾವೇ "victim "mode ಗೆ ತಳ್ಳಿಕೊಂಡು ಬಿಡುತ್ತೇವೆ .ಕೊರಗೋದ್ರಲ್ಲಿ ಸುಖ ಕಾಣುತ್ತೇವೆ. ಹೌದು ಕೆಲವೊಂದು ಘಟನೆಗಳ ತೀವ್ರತೆ ಪದಗಳಿಗೆ ಮೀರಿದ್ದು , ಅನುಭವಿಸಿದವರಿಗೆ ಮಾತ್ರ ಗೊತ್ತು . ಕೆಲವೊಂದು ಭಾವಗಳನ್ನು ಅನುಭವಿಸುವುದು ಸುಲಭವಲ್ಲ, ಆದರೆ ಅನುಭವಿಸದೇ ಉಪಾಯವಿಲ್ಲ .. ಜೀವನ ಸಹಜ ಸ್ಥಿತಿಗೆ ಮರಳ ಬೇಕೆಂದೆರೆ ನೆನಪುಗಳು ಸಹ್ಯ ಎನಿಸುವ ಸ್ಥಿತಿಯನ್ನು ತಲುಪಲೇ ಬೇಕು .ಬದುಕಲು ಭರವಸೆ ಬೇಕು ಹಾಗು ಅದನ್ನು ನಾವೇ ಹುಡುಕಿಕೊಳ್ಳಬೇಕು. ನಮ್ಮ ಬದುಕು ನಮ್ಮ ಜವಾಬ್ಧಾರಿ . ಮುರಿದು ಬಿದ್ದ ಮನ ಮರದ ಕೊರಡು ಆದಷ್ಟು ಬೇಗ ಚಿಗುರಲಿ .. ಹೊಸ ವಸಂತ ಬರಲಿ